ವಚನ - 513     
 
ಘಟ್ಟಣೆಯ ಲೋಕದಲಿ ಬೆಟ್ಟಗಳಾರಾಗಿ ಇಕ್ಕೆಲದಲೀರಾರು ಸೂರಿಯನನೂ ಮತ್ತೆ ಪ್ರಭೆಯನು ಮಾಡಿ ಹೊತ್ತಿಪ್ಪ ತತ್ವಕ್ಕೆ ಸೀಮೆ ತಾನೂ ಒತ್ತೆರನು ಮುತ್ತೆರನು, ಮುತ್ತೆರನು, ಒತ್ತೆರನು ಮತ್ತೆ ತ್ವಮಸಿಯ ರೂಪು ತಾನು ವಿಚಿತ್ರ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಭಕ್ತಿತಾತ್ಪರ್ಯದ ಪರಿಯಿಂತುಂಟು.