ವಚನ - 518     
 
ಚಾತುಷ್ಟ ಬ್ರಹ್ಮದಲಿ ಅನೇಕ ವಿಧ ಸಂಗಮದ ಸಾಕಲ್ಯ ದೇಹವನು ಕಳೆದು, ಸತ್ಯಾನಂದ ಏಕಮಯನೆನಿಪ ಭವದೂರನು. ಆತನನು ತಂದು ಮನಮಧ್ಯದೊಳಿರಿಸಿದ ಅಜಾತ ಗುರುವೈ ಕಪಿಲಸಿದ್ಧಮಲ್ಲಿಕಾರ್ಜುನಾ.