ವಚನ - 519     
 
ಚಿಂತೆ ನಿಶ್ಚಿಂತವಾಗದಯ್ಯಾ, ನಿಶ್ಚಿಂತ ನೆಲೆಮನೆಯಯ್ಯಾ, ಎನಗೆಂದಪ್ಪುದು ಹೇಳಾ. ಆನಂದಸ್ಥಾನದಲ್ಲಿ ತಾತ್ಪರಿಯದಿಂದ ನೀ ನಾನೆಂದಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.