ವಚನ - 629     
 
ದಾಯವೆಂಬ ಕುಳಿಯಲ್ಲಿ ಅದ್ದರು, ಅನಂತಕೋಟಿ ಜನರು. ಆಳುತ್ತ ಮುಳುಗುತ್ತೈದಾರೆ, ಕೋಟಿ ಕೋಟಿ ಬ್ರಹ್ಮಾದಿಗಳು. ಆಳುತ್ತೇಳುತ್ತೈದಾರೆ, ಅನೇಕ ಕೋಟಿ ವಿಶ್ವಾದಿಗಳು. ಗುರುಕರುಣದಿಂದ ಅಯ್ಯನಾಜ್ಞೆವಿಡಿದು ಅಕ್ಷರದ್ವಯದ ಆಧಾರವಿಡಿದವರೆಲ್ಲಾ ಆ ಕುಳಿಗೆ ಹೊರಗಾದರು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಮಹಾಬೆಳಗಿನಲ್ಲಿ ಬಯಲಾದರು.