ವಚನ - 695     
 
ನಿಧಾನವ ಕಂಡರೆ ಜಲಗ ತೊಳೆಯಲೇಕೆ? ಮಾಣಿಕ್ಯ ದೊರಕೊಂಡರೆ ಕೊಳ್ಳಿಯ ಬೆಳಕೇಕೆ? ಕಾಮಧೇನು ಕರೆವರೆ ಕರುವಿನ ಹಂಗೇಕೆ? ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನದೇವರು ತಮ್ಮ ನಿಜರೂಪವ ತೋರಿದ ಬಳಿಕ ಆರಾಧನೆಯೆಂಬ ಉಪಚಾರದ ಹಂಗೇಕೆ ಹೇಳಾ.