ವಚನ - 715     
 
ನೀರು ನೀರನೆ ಕಡೆದು ನೀರೊಳಗೆ ಉತ್ಪತ್ಯ ನಿರಾಲಂಬರೂಪವು. ಅರಣ್ಯದೊಳಗೆ ಮತ್ತೆ ಓರಂತೆ ಇದ್ದಡೆ ಕಾರಣವ ಹೇಳುವನು ಭಕ್ತಿರೂಪಾ. ಮೂರು ತಾನೇಯಾಗಿ, ಆರರಲಿ ಅನುಕರಿಸಿ ಆರಾರನೇ ಮೀರಿ ಗುರುಕರುಣದಾ ತೋರುವ ಶಿವಭಕ್ತಿ ಮೀರಿಪ್ಪ ವೈರಾಗ್ಯ ನೀರು ನಿರ್ಮಲ ವಜ್ರ ಕಪಿಲಸಿದ್ಧಮಲ್ಲಿಕಾರ್ಜುನಾ.