ವಚನ - 731     
 
ನೆಲ್ಲ ಗಿಡುವಿನಮರೆಯಲೊಂದು ಹುಲ್ಲು ಗಿಡವಾನಯ್ಯಾ. ನಿಮ್ಮ ಚರಣವೆ ಶರಣು ಶರಣೆಂದು ನಾನು ಧನ್ಯನಾದೆನು ನೋಡಯ್ಯಾ. ನಿಮ್ಮ ನೆನೆದವರೆಲ್ಲ ಧನ್ಯರು, ಕಪಿಲಸಿದ್ಧಮಲ್ಲಿನಾಥಯ್ಯ.