ವಚನ - 749     
 
ಪರಾಶಕ್ತಿಯಾದಿ ಐದನೊಡಗೂಡಿದ ಪರತತ್ವದ ಪ್ರಮಾಣವನರಿತೆನೆಂಬ ಯೋಗಿ ಕೇಳಾ, ನಿನ್ನ ಚಿತ್ತ ಬುದ್ಧಿ ಮನ ಅಹಂಕಾರವೆಂಬಲ್ಲಿ ತಪ್ಪದೆ ಪ್ರವೇಶಿಸಿಪ್ಪಾಕೆ ಐದರೊಳಗೊಬ್ಬಳು. ಇನಿತು ಸಂಬಂಧಿಯೈಸಿ ನೀನು ಇದರೊಳಗಾತು ಸಿಲುಕುವನಲ್ಲ ಪರಬ್ರಹ್ಮದ ಸೊಮ್ಮುಹಮ್ಮಳಿದು ಬ್ರಹ್ಮಸ್ಥಾನದಲ್ಲಿ ನಿರ್ಮಳಜ್ಞಾನಿಯಾಗಿಪ್ಪ ಆತನಿದಕ್ಕೆ ಸಿಕ್ಕ, ನೀನಿದರೊಳಗಣವನು ಅಯ್ಯ ವಾಙ್ಮನಸಾಗೋಚರನು ಕಪಿಲಸಿದ್ಧಮಲ್ಲಿಕಾರ್ಜುನನ ಪ್ರಮಾಣನು.