ವಚನ - 773     
 
ಪ್ರಪಂಚದಿಂದ ಪಾರಮಾರ್ಥವ ಕಂಡೆನೆಂಬುದು ದುರ್ಲಭ. ಶಿಷ್ಯನಾಗಿ ಗುರುವ ಕಾಣಬೇಕು; ಭಕ್ತನಾಗಿ ಜಂಗಮವ ಕಾಣಬೇಕು. ಇದು ಕಾರಣ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಗುರುವ ಕಂಡುದು ಸುಕೃತ; ಪ್ರಭುವಿನ ಪೂರ್ಣಕೃಪೆ ಕೇಳಾ, ಕೇದಾರಯ್ಯಾ.