ವಚನ - 812     
 
ಬಾವಿಯೊಳಗೊಂದು ಬಾಲಚಂದ್ರನ ಜನನ ಸ್ಥೂಲಸೂಕ್ಷ್ಮಕ್ಕೆ ತಾನು ಮೂಲನಾಗಿ, ಆರೈದುವೋರಂತೆ ಧಾರುಣಿಯ ಸಮನವನು ತಾನು ನಡೆಸುತ್ತಿಕ್ಕು ಸುಚಿತ್ತದಿಂದ, ಆ ಚಿತ್ತವನು ಮನವನು ಮತ್ತೆ ಸ್ವಸ್ಥಾನದಲಿ ಹತ್ತೆ ಸಾರಿಸಿದಾತ ನಿತ್ಯನಾ ಮತ್ತೆ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ಚಿತ್ತವೆಲ್ಲವೂ ನಿಶ್ಚಿತ್ತವಾಗಿ.