ವಚನ - 811     
 
ಬಾಲರು ಇನಿದ ಮಚ್ಚಿದಂತೆ ನಾ ನಿಮ್ಮ ಮಚ್ಚಿ ಬಿಡುವೆನೆ? ಮಚ್ಚಿದ ಮನಕ್ಕೆ ತುಚ್ಛ ಬಾರದಂತೆ ಮಾಡು ಕಂಡಾ. ಎಲೆ ಅಯ್ಯಾ, ಅಯ್ಯಾ, ನಿಮ್ಮ ಧರ್ಮ. ಸರ್ವರೆಲ್ಲರೂ ಈ ನಿನ್ನವ ನಿನ್ನವನೆಂದೆಂಬರು. ಎನ್ನ ಮಾನಸ-ವಾಚಕ-ಕಾಯಕದಲ್ಲಿ ನೀನಲ್ಲದೆ ಅನ್ಯವನರಿಯೆ. `ಭೃತ್ಯಾಪರಾಧ ಸ್ವಾಮಿನೋ ದಂಡ' ಎಂಬುದುಂಟು. ನಿನ್ನ ಬಲ್ಲಂತೆ ಸಲಹು ಕಪಿಲಸಿದ್ಧಮಲ್ಲಿಕಾರ್ಜುನಾ.