ವಚನ - 839     
 
ಭಸಿತ ರುದ್ರಾಕ್ಷಿಯನು ಧರಿಸಿ, ಸಂಪ್ರೀತಿಯಲ್ಲಿ ಬಸವಾಕ್ಷರತ್ರಯವ ನೆನೆಯುತ್ತಿಪ್ಪ ಶರಣರೇ ಇಹಲೋಕ ಪರಲೋಕ; ಭ್ರಮೆಗೆಟ್ಟು ಇರುತಿಪ್ಪ ಇಹಲೋಕವೇ ರುದ್ರಲೋಕ ತಾನು. ಕರುಣಾಕರ ಕಪಿಲಸಿದ್ಧಮಲ್ಲೇಶ್ವರನ ಶರಣರು ಇರುತಿಪ್ಪುದೇ ರುದ್ರಲೋಕ ತಾನು.