ವಚನ - 841     
 
ಭಾವ ಬಲಿಸಬೇಕಲ್ಲದೆ ವಿಭಾವ ಮಾಡಲುಂಟೆ? ಗುರುಭಕ್ತಿಯಲ್ಲಿ ಭಾವ ಬಲಿದುದೆ ಬ್ರಹ್ಮಜ್ಞಾನ; ಗುರುಭಕ್ತಿಯಲ್ಲಿ ಭಾವ ನಿಂದುದೆ ಸಹಜಸ್ಥಿತಿ ಗುರುಭಕ್ತಿ ಮರೆವ ಅರಿವ ಮರೆತುದೆ, ಕಪಿಲಸಿದ್ಧಮಲ್ಲಿಕಾರ್ಜುನದೇವನ ಮಹಾಮನೆ; ಇದು ಸತ್ಯ ಕೇಳಾ ಶಿವತಾಯಿಯೆ.