ವಚನ - 855     
 
ಮತ್ತೆ ಮತ್ತೆ ತನ್ನ ಚಿತ್ತ ಮುಟ್ಟಿದಲ್ಲಿಗೆ ಹೊತ್ತು ಹೊತ್ತು ತೊಳಲುತಿರ್ದಳವ್ವೆ. ಚಿತ್ತ ಪರಿಪಕ್ವವಾದಡೆ, ಅವನ ಅಂಗದಲ್ಲಿ ಭೇದಿಸಿಹೆನೆಂದು ಅಂಗ ಅನ್ಯಂಗವಾಗದ ಮುನ್ನ, ಲಿಂಗ ನೀನೆಯಾದಳು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನನವ್ವೆ.