ಮನವೆಂಬ ಮಂಟಪದ ನೆಳಲಲ್ಲಿ
ನೆನೆಹೆಂಬ ಜ್ಞಾನಜ್ಯೋತಿಯ ಬೆಳಗನಿಟ್ಟು
ಘನಪುರುಷ ಪವಡಿಸೈದಾನೆ, ಎಲೆ ಅವ್ವಾ.
ಅದನೊಂದೆರಡೆನ್ನದೆ ಮೂರು
ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ
ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ.
ಆರೇಳೆಂಟೆಂಬ ವಿಹಂಗಸಂಕುಳದ
ಉಲುಹು ಪ್ರಬಲವಾದಡೆ,
ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
Music
Courtesy:
Transliteration
Manavemba maṇṭapada neḷalalli
nenehemba jñānajyōtiya beḷaganiṭṭu
ghanapuruṣa pavaḍisaidāne, ele avvā.
Adanonderaḍennade mūru
bāgila mucci nālka muṭṭade
aida taṭṭade iru kaṇḍa, ele avvā.
Ārēḷeṇṭemba vihaṅgasaṅkulada
uluhu prabalavādaḍe,
kapilasid'dhamallikārjunanu nidregeṭṭalliranu.