ವಚನ - 872     
 
ಮಲತ್ರಯಂಗಳ ಕೆಡಿಸಲ್ಕೆ ಪ್ರಭುವಾಗಿ ಬಂದ; ಅಜ್ಞಾನಿಗಳಿಗೆ ಸುಜ್ಞಾನವ ತೋರಲ್ಕೆ ಪ್ರಭುವಾಗಿ ಬಂದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಎನ್ನ ಭವದ ಬೇರ ಹರಿಯಲ್ಕೆ ಪ್ರಭುವಾಗಿ ಬಂದ.