ವಚನ - 871     
 
ಮರುಳುತನದಲಿ ಭ್ರಮಿಸಿ ಫಲಪದಕ್ಕೊಳಗಪ್ಪವನ ಎತ್ತಿದ ಗುರು ಬಸವಣ್ಣ. ಆಜ್ಞಾಸಿದ್ಧನನರ್ಚಿಸುವ ಪರಿಯಾಯವಿದೆಂದು ತೋರಿದ ಗುರು ಬಸವಣ್ಣ. ಸರ್ವಸ್ವವನೊಪ್ಪಿಸೆ ಎನ್ನ ತನ್ನಂತೆ ಮಾಡಿದ ಕಪಿಲಸಿದ್ಧಮಲ್ಲಿಕಾರ್ಜುನ.