ವಚನ - 878     
 
ಮಹಾಭಕ್ತರ ಹೃದಯದಲ್ಲಿ ದೇವರ ದೇವ ಬೈಸಣಿಗೆಯಾಗಿಪ್ಪ. ಭಕ್ತರ ವಚನಂಗಳು ಗಂಗಾನದಿಯಾಗಿ, ಎದೆ ಕರ್ಣಂಗಳು ತುಂಬಲೊಡನೆ ವಿರಕ್ತಿ ವೇಧೆಯಾಗಿ ಭಕ್ತಿಯಾಮೋದವಾಗಿ ನಿಮ್ಮ ಶ್ರೀಪಾದವ ಸುತ್ತುಗೆ ಕಪಿಲಸಿದ್ಧಮಲ್ಲಿನಾಥಯ್ಯಾ.