ವಚನ - 883     
 
ಮಾಡಿದೆನೆಂಬ ಪಾಪದ ಶುದ್ಧಿ ಸೂಕ್ಷ್ಮದಲ್ಲಿ ಹೇಳಿಹೆನಯ್ಯಾ: ವ್ಯಾಸನು ಮನದ ಶಾಂತಿಗಾಗಿ ರೂಢಿಯಲ್ಲಿ ಮೈದೊಳೆದನೆಂಬ ಗಾದೆಯಂತೆ, ಮಾಡಿದ ಪಾಪವ ತೀರಿಸಲಿಲ್ಲ. ಇನ್ನು ಮುಂದೆ ಮಾಡೆನೆಂಬುದಕ್ಕೆ ಗಂಗೆಯ ಸ್ನಾನ ಕೇಳಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.