ವಚನ - 890     
 
ಮಾಸಿಮಾಸಿದಂತೆ ತೊಳೆದಡೆ ಶುದ್ಧಮಾಡುವ ಗುಣ ಉದಕವಯ್ಯಾ; ಶ್ವಾಸಶ್ವಾಸಕ್ಕೆ ಶಾಂತಿಯ ಕೊಡುವ ಗುಣ ಉದಕವಯ್ಯಾ; ಮಾಡಿದ ಪಾಪವ ಪರಿಹರಿಸುವದೆಂಬುದು ಶಶವಿಷಾಣ; ನಿಶ್ಚಯ ನೋಡಯ್ಯಾ. ಅದು ಕಾರಣ, ಇದು ಗಂಗೆಯಹುದು ಶುದ್ಧ ಶಾಂತಿಗೆ; ಗಂಗೆಯಲ್ಲ ಕರ್ಮಶುದ್ಧಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.