ವಚನ - 891     
 
ಮಾಹೇಶ್ವರನಾದಾತ ಮರಣಕ್ಕೊಳಗಾಗ, ಕರಣೇಂದ್ರಿಯಂಗಳಿಗೆ ಎಡೆಗುಡ. ಕಾಲ ಕಲ್ಪಿತನಲ್ಲ, ಕರ್ಮಕ್ಕೆ ವಿರಹಿತ. ಆತನ ತನು ಸಾಕ್ಷಾತ್ ಶಿವನ ತನು. ಆತ ನಿತ್ಯ ಕೇವಲ ಮುಕ್ತ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಮಾಹೇಶ್ವರನು.