ವಚನ - 893     
 
ಮುಕ್ತ್ಯಂಗನೆಗೆ ಚಿತ್ತಶುದ್ಧಿಯಪ್ಪ ವೃಕ್ಷವ ಚಿತ್ತದಲ್ಲಿ ಬಿತ್ತಿದನಲ್ಲಾ. ಆ ವೃಕ್ಷ ಆ ಫಲಕರ್ಮಕ್ಕೆ ಆ ಫಲವಾಗುತ್ತೈದೂದೆ ನೋಡಾ. ನಿಃಕರ್ಮಕ್ಕೆ ಸಫಲವಪ್ಪ ವೃಕ್ಷ ನೀನೆ ಅಯ್ಯಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.