ವಚನ - 894     
 
ಮುಕ್ತ್ಯಂಗನೆಯ ಸಂಯೋಗದಿಂದ ಶುದ್ಧ ಮುಗ್ಧನಾದೆ. ಭಕ್ತ್ಯಂಗನೆಯ ಸಂಯೋಗದಿಂದ ಉರುತರ ನಿಷ್ಕಳವನೆಯ್ದಿದೆ. ಜ್ಞಾನಾಂಗನೆಯ ಸಂಯೋಗದಿಂದ ತತ್ವಾರ್ಥವನರಿದೆ. ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗದಿಂದ ತ್ವಮಸಿಯಾದೆ.