ವಚನ - 921     
 
ಮೂರರಿಂದ ಮುನ್ನಾದ, ಮೂರು ಮತ್ತೆ ತಾನಾದ. ಆರನತಿಗಳೆದ ತತ್ವ ಸೀಮೆಯಾದ, ಆರು ತಾನಾಗಿ ಆರಾರುನತಿಗಳೆದ. ಸಂಬಂಧದ ಮೇಲಣ ಕ್ರಿಯಾಳಾಪ ತವಕಿಸುವ ಸಂಯೋಗ ಅದರೊಳಗೆ ವಿಯೋಗಿ ಕಪಿಲಸಿದ್ಧಮಲ್ಲೇಶ್ವರ.