ವಚನ - 923     
 
ಮೂರರಿಂ ಮುನ್ನವೆ ತೋರಿಪ್ಪ ಸದ್ಭಕ್ತಿ ಮೀರಿಪ್ಪ ಕ್ರೀಯದಕೆ ಶಾಖೆ ಮೂರು. ಫಲವು ಹಲವಾಗಿ ಅಲ್ಲಿಪ್ಪ ಫಲವಾರು ಸಲ್ಲದು ದುಷ್ಕರ್ಮಿಗಳ ಯೋಗಕ್ಕದು. ಸ್ವಾತಂತ್ರ ಸೀಮೆಯನು ತೋರಿಪ್ಪ ತತ್ವದಾ ಸೀಮೆ ತಾನು ಅನಾಹತನು ಸ್ವಾತಂತ್ರ ನಿಸ್ಸೀಮ ಸ್ವಾತಂತ್ರ ಸದ್ಭಕ್ತಿಗೊಲಿವಾತನು, [ಕಪಿಲಸಿದ್ಧಮಲ್ಲಿಕಾರ್ಜುನಾ].