ವಚನ - 934     
 
ಮೇಲುಗೆಟ್ಟಾ ಸೀಮೆ, ತೆರಹುಗೆಟ್ಟಾ ಬ್ರಹ್ಮ ; ಅಯ್ದಾರು ಕಣೆಯದಿಂ ಮೇಲೆ ದುರ್ಗ. ಕಾಲಾಳು ನಾಯಕರು ಮೇಲೆ ರಥಪಾಯಕರು ಆರೈದು ಓರಂತೆ ದುರ್ಗದಲ್ಲಿ. ಧಾರುಣಿಯ ಕಳ್ಳರಿಗೆ ನಾನಂಜಿ ದುರ್ಗದೊಳು ಓರಂತೆ ಅಡಗಿರ್ದ ಕಪಿಲಸಿದ್ಧಮಲ್ಲಿಕಾರ್ಜುನ.