ವಚನ - 935     
 
ಮೊದಲಲ್ಲಿಯ ಪುಣ್ಯಪಾಪವದು ಇದರಲ್ಲಿಯ ಜೀವಕ್ಕೆ ಸುಖದುಃಖ ನೋಡಾ ಎಂದೆನಲಾರೆ. "ಸಂಗಾತ್ಸಂಜಾಯತೇ ಜ್ಞಾನಂ ಜ್ಞಾನಾತ್ಸಂಜಾಯತೇ [ಶಿವಃ] ಶಿವತ್ಸಂಜಾಯತೇ ಮುಕ್ತಿರ್ಮುಕ್ತಿರನ್ಯತ್ರ ನಾಸ್ತಿ ವೈ" ಎಂದ ಬಳಿಕ, ಸಂಗದಿಂ ಸುಖದುಃಖವಲ್ಲದೆ, ಪೂರ್ವಾರ್ಜಿತ ಪುಣ್ಯಪಾಪವೆಂಬವ ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.