ವಚನ - 947     
 
ಯೋಗಿಯ ಶರೀರ ವೃಥಾಯ ಹೋಗಲಾಗದಯ್ಯಾ. ಪುಣ್ಯವ ಪುಣ್ಯವ ಮಾಡುವುದು ಲೋಕಕ್ಕೆ. ಆದಿಯ ಹಾದಿಯ ಹತ್ತುವುದಯ್ಯಾ. ಆ ಲೋಕಕ್ಕೆ ಸೋಪಾನವ ಕೊಡುವ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು.