ವಚನ - 968     
 
ಲೋಕ ಹದಿನಾಲ್ಕರಲಿ ಏಕೈಕ ಸಮತೆಯನು ಠಾವರಿದು ಗ್ರಾಮವನು ನೋಡಿ ರಚಿಸಿ, ಸೀಮೆ ಸಾಯುಜ್ಯದಲಿ ತರಳ ನದಿ ಹರಿವುತಿರೆ, ತರುಣಿಯ ಮಸ್ತಕದ ನದಿಯು ಅರತು, ಅತಿಶಯದ ಆನಂದಗಾಳಿ ಬೀಸಲು ತಂದ ಪರಿಮಳವು ನೇತ್ರದಿ ಊರ್ಧ್ವವಾಗಿ ಅತಿಶಯದ ರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಅವಗ್ರಹಿಸಿದ ರೂಪು ಸಮತೆ ತಾನೆ.