ವಚನ - 989     
 
ವ್ಯಾಘ್ರದಿಂ ದಿವರಾತ್ರಿಗಳಲ್ಲಿಯು ಕಾಣಬಹಾಂಗೆ ಭೇರುಂಡನಾ ಭೂಮಿ ಆಕಾಶಂಗಳೆರಡರಲ್ಲಿಯೂ ಚರಿಸುವ ಹಾಂಗೆ ಶಿವಯೋಗಿಯಾ ಪ್ರಪಂಚ ಪರಮಾರ್ಥಂಗಳೆರಡರಲ್ಲಿಯೂ ಕಂಡು ಆಚರಿಸುವನೆಂಬುದು ತೋರಲ್ಪಡುತ್ತಿಹುದು. ಶಿವಾಚಾರ ಸಂಪನ್ನರಾಗಿ ಶಿವಯೋಗದ ಹೊಲಬನರಿದವರು ಲೌಕಿಕದತ್ತಲೂ ಚರಿಸುವರು, ಪರಮಾರ್ಥದತ್ತಲೂ ಚರಿಸುವರು, ಕಪಿಲಸಿದ್ಧಮಲ್ಲಿನಾಥನೆಂಬ ಮಹಾಬಯಲು ಕೂಡಿರ್ಪರು.