ವಚನ - 994     
 
ಶಿಖರ ಶಿರಸದಂತ್ಯದಲ್ಲಿ ಕಳಸ ಕೆಲಸ ರಚಿಸಿದ ಪರಿಯ ನೋಡು, ಎಲೆ ಕಮ್ಮಟ. ತರುಣ ಬಂದು ಕೂಪಂಗಳ ತೆರಹಿಲ್ಲದ ಬ್ರಹ್ಮಾಂಡ ತರುಣಿಯ ಮಸ್ತಕದಲೊಕ್ಕೆ, ಅತಿವೃಷ್ಟಿ ಪ್ರವಾಹದ ಒಳಗೆ ಬಿದ್ದು ಅದ್ದೆನೆಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.