ವಚನ - 1028     
 
ಸಂಭ್ರಮದ ಶರಧಿಯೊಳಿಂಬಿನಲಿ ಪರಿತಪ್ಪಾಗ ಗಂಭೀರ ಉಳ್ಳುದನೊಂದನು ಕಾಣೆ, ಎನ್ನ ಬಿಡು ತನ್ನ ಬಿಡೆಂಬುದು ತನುಗುಣ ಸಂಬಂಧ. ಎನ್ನ ಬಿಡು ತನ್ನ ಬಿಡೆಂಬುದು ಕಾಯವಿಕಾರ. ದೆಸೆದೆಸೆವರಿದು ಪಸರಿಸುವ ಮನವನು ನಿಮ್ಮ ವಶಕ್ಕೆ ತಂದಿರಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.