ವಚನ - 1081     
 
ಸೀಮೆ ಸಂಬಂಧಗಳ ಮೀರಿಪ್ಪ ಮಂತ್ರಕ್ಕೆ ರಾಜಮಂತ್ರನು ತಾನು ಪಂಚಾಕ್ಷರಿ. ಪಂಚಾಕ್ಷರಿಯ ಗುಣದ ಬಸವಾಕ್ಷರತ್ರಯದ ಧ್ಯಾನ ಮೌನದ ಗುಣದ ಸತ್ವವಿಡಿದು, ಆನಂದ ತ್ರೈಲಿಂಗ ಮೂಲಮಂತ್ರಕ್ಕೀಗ ಬಸವಾಕ್ಷರವು ಮಾತೆ ಕಪಿಲಸಿದ್ಧಮಲ್ಲಿಕಾರ್ಜುನಾ.