ವಚನ - 1193     
 
ಕಲ್ಪಿತೋದಕ ಒಂದು , ಅರ್ಪಣೋದಕ ಮೂರು, ಮತ್ತೆ ಅಂಗೋದಕವು ತ್ರಯವಾಗಿಯು, ಮಿಕ್ಕ ಪ್ರಸಾದೋದಕ ಅವು ಮೂರು, ಸತ್ವರಜತಮವತಿಗಳೆದವರಿಗಲ್ಲದೆ, ಹತ್ತು ಪಾದೋದಕವನರಿಯಲರಿದು ತಾನು ಚಿತ್ತಶುದ್ಧನಾಗಿ ಗುರುಕರುಣದಿಂದವೆ ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಮತ್ತೆ ಸಂದಿಲ್ಲದಿಹೆ ಅವರು ನೀನು. ಮುತ್ತು ನೀರನು ಕೂಡಿದಾನಂದ ಭೇದದೊಲು ತತ್ತ್ವಮಸಿಯಪ್ಪನೈ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ.