ವಚನ - 1208     
 
ವೇದ ವೇದಾಂತವನೋದಿದಡೇನು ಮನಸ್ಸೂತಕವಳಿಯದನ್ನಕ್ಕ ? ಸಿದ್ಧ ಸಿದ್ಧಾಂತವ ಶ್ರಮಬಿಟ್ಟಡೇನು ಸಾಧಿಸಿ ಕೀರ್ತಿಯ ಪಡೆಯದನ್ನಕ್ಕ? ಇವೆಲ್ಲ ಹೊರಗಣ ಮಾತು. ಮಾತೊಂದೆ ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ ಸದಾಚಾರ ಸನ್ಮಾರ್ಗವಯ್ಯಾ.