ವಚನ - 1264     
 
ಸ್ಥೂಲದೇಹ ತೊಳೆದಡೇನು, ಸೂಕ್ಷ್ಮದೇಹ ಶುದ್ಧವಾದಡೇನು. ಕಾರಣಾತೀತನಾಗದನ್ನಕ್ಕ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನಾ ಯೋಗಿಯಾದಡೇನು ಮನವೊಲಿದು ಚೆನ್ನಬಸವಣ್ಣ ಲಿಂಗವ ಕೊಡದನ್ನಕ್ಕ ?