ವಚನ - 1270     
 
ಶಿವನು ಚೆನ್ನನ ಮನೆಯಲ್ಲಿ ಅಂಬಲಿಯನುಂಡನೆಂದಡೆ, ನಮ್ಮ ಗಣಂಗಳು ನಗುವರಯ್ಯಾ; ಕೈಬಡೆದು ಕೈಬಡೆದು ನಗುವರಯ್ಯಾ. ಶಿವನಾಚರಣೆ ಶಿವನಿಗಿರಲಿ, ನಮಗೇಕೆಂದರು. ಶಿವನು ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತನು; ನಾವು ಉತ್ಪತ್ತಿ ಸ್ಥಿತಿ ಲಯಂಗಳನಳಿಯಬೇಕೆಂದು ಬಂದೆವಲ್ಲದೆ, ಅವರಲ್ಲಿ ವಾಕ್ಸಾಮರಸ್ಯವಲ್ಲದೆ, ಕಾಯಸಾಮರಸ್ಯವಿಲ್ಲವು. ಶಬ್ದವಿರಹಿತನಾಗಬೇಕೆಂಬವರಿಗೆ ಶಬ್ದಸೂತಕವೇಕಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ ?