ವಚನ - 1290     
 
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿದಿರಿ; ಲಿಂಗವಾಗಿ ಬಂದೆನೆಗೆ ಮನದ ಮಲಿನವ ಕಳೆದಿರಿ; ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ. ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ. ಇನ್ನೆನಗತಿಶಯವೇನೂ ಇಲ್ಲ.