ವಚನ - 1357     
 
ಮನವೆಂಬ ಸಂಕಲ್ಪವನರಿಯೆನು- ಸಂಕಲ್ಪ ಸಿದ್ಧಿಯಾಯಿತ್ತಾಗಿ. ಸಂಕಲ್ಪವೆಂಬ ಸಂಬಂಧವನರಿಯೆನು ನಿಮ್ಮ ವಿಚಾರವೆಡೆಗೊಂಡಿತ್ತಾಗಿ. ನಿಮ್ಮ ವಿಚಾರವೆ ಅಂತರಂಗದೊಳಗೆ ತುಂಬಿತ್ತಾಗಿ, ಎನ್ನ ಮನದ ಮುಂದೆಲ್ಲಾ ನೀನೆಯಾಗಿರ್ದೆಯಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.