ವಚನ - 1370     
 
ಅಯ್ಯಾ, ನಿಮ್ಮ ಕರಸ್ಥಲದ ಘನವನುಪಮಿಸಬಲ್ಲವರಿಲ್ಲವಯ್ಯಾ. ನಿಮ್ಮ ಮಹಿಮೆಯನರಿವಡೆ ನಾನೇತರೊಳಗೇನಯ್ಯಾ? ಇಷ್ಟಲಿಂಗವ ಮುಟ್ಟಿದ ಶರಣನೊಳಗೆ ಹುಟ್ಟಿದ ಕರಸ್ಥಲವೆಷ್ಟೆಂಬುದ ತಿಳುಹಿ ಎನ್ನನುಳುಹಿಕೊಳ್ಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.