ವಚನ - 1465     
 
ಪತ್ರೆಯ ತಿಂದಾಡು ಮುಕ್ತವಾದುದೆಂಬುದ ಬಲ್ಲಡೆ ಹೇಳಿರಯ್ಯಾ. ಲಿಂಗವ ಪೂಜಿಸಿದ ವರ್ಣಿಕ ಲಿಂಗವಾದನೆಂಬುದ ಬಲ್ಲಡೆ ಹೇಳಿರಯ್ಯಾ. ಜಂಗಮವ ಸಂತೃಪ್ತಿ ಬಡಿಸಿದ ಭಕ್ತ ಭವವಿರಹಿತನಾದುದ ಬಲ್ಲಡೆ ಹೇಳಿರಯ್ಯಾ. ಇವೆಲ್ಲ ಚತುರ್ವಿಧ ಪದಕ್ಕೆ ಒಳಗು! ತನ್ನ ತಾ ತಿಳಿದ ವೀರಶೈವ ಭವಕ್ಕೆ ಬಂದನೆಂಬ ದ್ವಿರುಕ್ತಿಯನು ಬಲ್ಲಡೆ ಹೇಳಿರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ.