ವಚನ - 1507     
 
ಸೂತ್ರವ ಬಿಟ್ಟಿತೆಂದು ಸಂದೇಹಗೊಳ್ಳದಿರಾ, ಮನುಜರಿರಾ. ಸೂತ್ರವಿದ್ದಲ್ಲಿ ನಿಮ್ಮಂಗಕ್ಕೆ ಸೂತ್ರವಾದನಯ್ಯಾ ಲಿಂಗಮೂರ್ತಿ. ಸೂತ್ರ ತಪ್ಪಿತ್ತೆಂಬಲ್ಲಿ ಸೂತ್ರ ತಪ್ಪಿಲ್ಲ, ನಿಮ್ಮ ಮನಸ್ಸೂತ್ರವೆ ಭಿನ್ನವಾಯಿತ್ತಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.