ವಚನ - 1514     
 
ಜ್ಯೋತಿಷ್ಯವದು ಜ್ಯೋತಿಯಂತಯ್ಯಾ: ಕೂಡುವ ಕಾಲಕ್ಕೆ ಪ್ರಕಾಶಮಯವು: ಕೂಡದ ಕಾಲಕ್ಕೆ ದಗ್ಧಮಯವು. ಇದರಂತುವನರಿದವ ವರರುಚಿಯಲ್ಲದೆ, ಮತ್ತೊರ್ವನ ಕಾಣೆ, ಕಪಿಲಸಿದ್ಧಮಲ್ಲಿಕಾರ್ಜುನಾ.