ವಚನ - 1566     
 
ಒಂದು ಮುಳ್ಳು ಮೂರುಲೋಕದ ಜನರಿಗೆ ನಟ್ಟಿತ್ತು. ಆ ನಟ್ಟ ಮುಳ್ಳು ಮುರಿಯಬೇಕೆಂದಾರರಿಯರು. ಆ ಮುಳ್ಳು ಮುರಿದವ ಮೂಲೋಕದರಸು ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ, ಹಾವಿನಹಾಳ ಕಲ್ಲಿನಾಥಾ.