ವಚನ - 1612     
 
ಬಿಟ್ಟು ಮಹೇಶನಾದೆನೆಂಬುದು ಅರುಹಿನ ಕೇಡು. ಹಿಡಿದು ಭಕ್ತನಾದೆನೆಂಬುದು ನಿಜದ ಕೇಡು. ಬಿಡುವುದು ಹಿಡಿವುದು ಮನಃಕಲ್ಪಿತವಲ್ಲದೆ, ಕಲ್ಪನಾರಹಿತ ಭಕ್ತ-ಮಹೇಶರಲ್ಲಿಪ್ಪುದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.