ವಚನ - 1625     
 
ಆವನಾದಡೇನು, ಮೂರಳಿದವನೆ ಮೂರು ಕೋಣೆಯ ದಾಟುವನಯ್ಯಾ. ಆಸೆ ಇಹುದೊ ಇಲ್ಲವೊ ಎಂದು ಮನಸೆಳೆವುದಕ್ಕೆ ಗುರು ಚೆನ್ನಬಸವಣ್ಣನಾದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನು.