ವಚನ - 1644     
 
ಸರ್ವಂ ಶಿವಮಯಂ ಜಗತ್ ಎಂಬ ವಾಕ್ಯವನರಿಯದೆ ಹೋಗದಿರಾ, ಮನವೆ. `ಪಂಚತತ್ವರೂಪಾಯ' ಎಂಬ ಶ್ರುತಿವಾಕ್ಯವ ಮರೆದೆಯಲ್ಲಾ, ಮನವೆ. `ಲಿಂಗಮದ್ಯೇ ಜಗತ್ಸರ್ವಂ' ಎಂಬ ಮಹಾವಾಕ್ಯವ ಮರೆದೆಯಲ್ಲಾ, ಮನವೆ. ರಜ್ಜು ಸರ್ಪ ನ್ಯಾಯ-ರಜ್ಜುವ ಸರ್ಪವೆಂದು ನಂಬಿ, ಕಪಿಲಸಿದ್ಧಮಲ್ಲಿಕಾರ್ಜುನಂಗೆ ಬೇರೆಯಾದೆಯಲ್ಲಾ, ಮನವೆ.