ವಚನ - 1674     
 
ಮಾನವಿಲ್ಲದ ಭೋಜನವದು ಶ್ವಾನನ ಮಾಂಸವಯ್ಯಾ. ಜ್ಞಾನವಿಲ್ಲದ ಕ್ರಿಯೆಯದು ಸಿದ್ಧಿಗಳಿಗೀಡಯ್ಯಾ. ಧ್ಯಾನವಿಲ್ಲದ ಪೂಜೆಯದು ಕಾನನ ಜ್ಯೋತಿಯಯ್ಯಾ. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನೀನಿಲ್ಲದ ಭಕ್ತಿಯದು ಚಾಂಡಾಲ ಪಾಕವಯ್ಯಾ.