ವಚನ - 1676     
 
ಸಂಪಿಗೆಗಂಧವ ಸೇವಿಸಿದಲ್ಲಿ ಭ್ರಮರ ಜನ್ಮ ಈಡಾಡಿತ್ತು. ಕೇಸರಿ ತನ್ನ ಗಂಧಕ್ಕಾಗಿ ತನ್ನ ಜನ್ಮ ಈಡಾಡಿತ್ತು. ಶರಣನ ಬೋಧೆ ಸೇವಿಸಿದಲ್ಲಿ ಎನ್ನ ಜನ್ಮ ಈಡಾಡಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.