ವಚನ - 1697     
 
ಸ್ಥಲವಿಡಿದಾಚರಿಸಬೇಕೆಂಬನ ಭಾಷೆ ಬಾಲಭಾಷೆ. ಭಕ್ತನಾಗಿ, ಭಕ್ತಸ್ಥಲವಾವರಿಸುವುದದು ಯೋಗ್ಯವಯ್ಯಾ. ಭಕ್ತನಾಗಿ, ಮಹೇಶಸ್ಥಲ ಅಳವಡಬಾರದೇನಯ್ಯಾ? ಭಕ್ತನಾಗಿ, ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲ ಅಳವಡಬಾರದೇನಯ್ಯಾ? ಮನೆಯಲ್ಲಿದ್ದ ಲೆತ್ತಗಳು ಮನೆಯ ಮೀರಿ ಮೀರಿ ಹಾರಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.